ಕಾರ್ಗಿಲ್ ವಿಜಯ

ಮುಗಿಲ ಮುತ್ತಿಡುವ ಗಿರಿ ಶಿಖರಗಳಲಿ
ತೊರೆ, ನದಿಗಳ ಹಿಮದ ಜಾರುಂಡೆಗಳಲಿ

ಕಾಳಕೂಟ ರೂಪದ ಕಾರ್ಗಿಲ್ ಕಣಿವೆಯಲ್ಲಿ
ನರ್ತನ ಗೈಯ್ಯುತಿದ್ದವು ಸಾವು ನೋವುಗಳು

ತಾಂಡವ ರೂಪದ ವೀರಯೋಧರು
ಭಾರತಾಂಬೆಯ ಹೆಮ್ಮೆ ಕುವರರು

ಚಳಿಗಾಳಿ ಹಸಿವೆನ್ನದೆ
ಜೈಹಿಂದ್ ಎನ್ನುತಲಿ ಎದೆಯೊಡ್ಡಿ ನಡೆದರು

ಅಜೇಯ, ಅಹುಜ, ಸೌರವ, ಕಾಲಿಯಾ
ವಿಕ್ರಮ ಬಾತ್ರಾ, ಕರ್ನಲ ವಿಶ್ವನಾಥ

ವಿನೋದ ಪಾಂಡೆ, ಮೇಜರ ಶರವಣನ್
ವಿವೇಕ ಗುಪ್ತ, ಯಶವೀರಂತರನೇಕ

ವೀರಯೋಧ ಸೇನಾನಿ ಅಮರರಾದರು
ತ್ರಿವರ್ಣ ಧ್ವಜ ಹಾರಿಸುತಲಿ

ಕಾರ್ಗಿಲ್ ಕಣಿವೆ ಕಾರ್ಗತ್ತಲಲಿ
ಕಲಿಗಳಾಗಿ ಕಾದಾಡಿದ ವೀರರು

ಕನ್ನಡಾಂಬೆಯ ಕುಡಿಗಳು ಧೊಂಡಿಬಾ, ವೆಂಕಟ,
ಗುರುಬಸಯ್ಯಾ, ದಾವಲಸಾಬ, ಕಾವೇರಪ್ಪ, ಪೋತರಾಜ,
ಸಿದ್ದನಗೌಡ, ಯಶವಂತ, ಮಡಿವಾಳಪ್ಪ, ಮೋಹಿಲನ್,

ಕಾರ್ಗಿಲ್ ವಿಜಯ ಕಾರ್ಯಾಚರಣೆಯ
ಚಿರತೆಗಳಾಗಿ ಸಿಂಹ ಗರ್ಜನೆಗೈದರು

ಕಾರ್ಗಿಲ್, ಕಕ್ಸರ್‍, ಡ್ರಾಸ, ಮುಸ್ಕೋಹಾ
ಬಟಾಲಕ, ಟೋಲೋರಿಂಗ್, ಟೈಗರ ಶಿಖರಗಳಪ್ಪಿದರು

ಶ್ವೇತ ವಸ್ತ್ರಾಧಾರಿ, ಪ್ರಶಾಂತ…
ಶಿಖರಗಳಲ್ಲೆಡೆ ಕಾಲಿಟ್ಟಡಗಿದ ಕಪಿಗಳ
ರಕ್ಕಸ, ರಕ್ತ ಪಿಪಾಶೆಯ ವೈರಿ

ಮುಜಾಹಿದ್ದಿನ, ಜೆಹಾದ ಬಾಡಿಗೆ ಪಡೆ
ಕಾರುವ ಶೆಲ್ ಗುಂಡಿನ ದಾಳಿಗೆ
ಮೈಯೊಡ್ಡುತ ಎದೆ ಸೀಳಿದರು…

ವೈರಿಪಡೆಯ ರಕ್ತ ಚೆಲ್ಲುತ ವೀರಯೋಧರು
ಮಾತೃಭೂಮಿಯ ಮಡಿಲಲಿ ಮಡಿದರು

ಅಮರರಾದರು ವೀರ ಸಹೋದರರು
ಮಾತೃಭೂಮಿಯ ಋಣ ತೀರಿಸುತಲಿ

ತ್ಯಾಗ ಬಲಿದಾನಗಳಿಗೆ ಸಾಟಿಯಿರದೆ
ಪ್ರತಿ ಭಾರತೀಯನ ಮನದಲಿ ಉಳಿದರು

ದೇಶದ ಹೆಮ್ಮೆಯ ವೀರಚೇತನರು
ಕಾರ್ಗಿಲ್‌ದ ವೀರಮರಣದ
ವೀರಯೋಧರು ಹೆಮ್ಮೆಯ ಕುವರರು.

***

 

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಸ್ಥಿರವಲ್ಲಾ ಕಾಯಾ ಸ್ಥಿರವಲ್ಲಾ
Next post ವಸತಿ ಗೃಹ

ಸಣ್ಣ ಕತೆ

  • ಏಡಿರಾಜ

    ಚಲೋ ವಂದು ಅರಸು ಮನಿ, ಗಂಡ-ಹೆಂಡ್ತಿ ದೊಡ್ಡ ಮನ್ತಾನದಲ್ ಆಳ್ಕತಿದ್ರು. ಆವಾಗೆ ಆ ಅರಸೂಗೆ ಗಂಡ್ ಹುಡ್ಗರಿಲ್ಲ. ಸಂತತ್ಯಲ್ಲ, ಇದ್ರದು ನಿಚ್ಚಾ ಕೆಲ್ಸಯೇನಪ್ಪ ಅರಸು ಹಿಂಡ್ತಿದು, ಮನಿ… Read more…

  • ಬಲಿ

    ಅವಳು ಭಾಗಶಃ ಚಟ್ಟೆಯಾದ ಕಪ್ಪು ಬಣ್ಣಕ್ಕೆ ತಿರುಗಿದ ಅಲ್ಯೂಮೀನಿಯಂ ತಟ್ಟೆಯೊಳಗೆ ಸ್ವಲ್ಪ ಹಾಲು ಸುರಿದು ಅದಕ್ಕೆ ಸ್ವಲ್ಪ ನೀರನ್ನು ಬೆರೆಸಿ, ಒಲೆಯ ಮೇಲಿಟ್ಟು ಮುಚ್ಚಳ ಮುಚ್ಚಿದಳು. ಒಲೆಯ… Read more…

  • ವಿರೇಚನೆ

    ರವಿವಾರ ರಜವೆಂದು ರಾಮರಾವು ಶನಿವಾರ ರಾತ್ರಿಯೇ ಭೇದಿಗೆ ಔಷಧಿ ತೆಗೆದುಕೊಂಡ, ಕೆಲವು ತಿಂಗಳುಗಳಿಂದ ಊಟಕ್ಕೆ ರುಚಿಯಿಲ್ಲ. ತಿಂದದ್ದು ಜೀರ್ಣವಾಗುವುದಿಲ್ಲ. ರಾತ್ರಿ ನಿದ್ರೆ ಬರುವುದಿಲ್ಲ, ಹೊಟ್ಟೆ ಉಬ್ಬುತ್ತಿದೆ, ದೃಷ್ಟಿ… Read more…

  • ಬ್ರಿಟನ್ ದಂಪತಿಗಳ ಪ್ರೇಮ ದಾಖಲೆ

    ಫ್ರಾಂಕ್ ಆಗ ಇನ್ನು ಹದಿನಾಲ್ಕು ವರ್ಷದ ಹುಡುಗ ತೆಳ್ಳಗೆ ಬೆಳ್ಳಗೆ ಇದ್ದು, ಕರಿಯ ಬಣ್ಣದ ದಟ್ಟ ಕೂದಲಿನ ಬ್ರಿಟಿಷ್ ಬಾಲಕ. ಹೈಸ್ಕೂಲಿನಲ್ಲಿ ಓದುತ್ತಿದ್ದ ಫ್ರಾಂಕ್‌ಗೆ ಕಾಲ್ಚೆಂಡು ಆಟ… Read more…

  • ಗಿಣಿಯ ಸಾಕ್ಷಿ

    ಹತ್ತಿರವಿದ್ದ ನೆರೆಹೊರೆಯ ಮನೆಯವರಿಗೆ ಗಿಣಿಯ ಕೀರಲು ಕಿರುಚಾಟ ಕೂಗಾಟ ಸತತವಾಗಿ ಕೇಳಿಬಂದಾಗ ಅವರು ಅಲ್ಲಿಗೆ ಧಾವಿಸಿ ಬಂದಿದ್ದರು. ಗೌರಿಯು ಕಳೇಬರವಾಗಿ ಬಿದ್ದಿರುವುದು ನೋಡಿ ಅವರಿಗೆ ದಿಗ್ಭ್ರಾಂತಿಯಾಯಿತು. ಅವಳ… Read more…

cheap jordans|wholesale air max|wholesale jordans|wholesale jewelry|wholesale jerseys